खानापुर लाईव्ह न्युज / प्रतिनिधी “घनदाट जंगले आणि डोंगराळ भागात व्यापलेल्या या तालुक्यातील जंगली भागात शिक्षकांसाठी काम करणे हे खूप आव्हानात्मक काम आहे. तथापि, तालुक्याच्या सीमेवरील शाळांमधील शिक्षक उत्साहाने काम करत आहेत आणि मुलांना दर्जेदार शिक्षण देत आहेत,” अशा शिक्षकांचा गुणगौरव करणे हे आद्य कर्तव्य ठरते असे उद्गार आमदार विठ्ठल हालगेकर यांनी व्यक्त केले. शनिवारी शहरातील शनाया पाम्स सभागृहात शालेय शिक्षण विभाग, तालुका पंचायत आणि तालुका प्रशासन यांच्या सहकार्याने आयोजित तालुकास्तरीय शिक्षक दिन कार्यक्रमाचे उद्घाटन केल्यानंतर ते बोलत होते.
ते म्हणाले, “जर मुलांना चांगले मूलभूत शिक्षण मिळाले तर त्यांचे भविष्य सुरक्षित असेल. प्राथमिक शाळेतील शिक्षकांना दर्जेदार आणि प्रभावी शिक्षण देण्याची गरज आहे. शिक्षण विभाग शिक्षकांवर नवीन नियम लादत आहे. तथापि, शिक्षकांनी मुलांच्या ज्ञान विकासासाठी वेळ द्यावा आणि अध्यापन व्यवसायाचा आदर आणि प्रतिष्ठा राखावी.”
शिक्षक दिन कार्यक्रमाची सुरुवात माजी राष्ट्रपती एस. राधाकृष्णन आणि पहिल्या महिला शिक्षिका सावित्रीबाई फुले यांच्या प्रतिमेला पुष्पांजली अर्पण करून करण्यात आली. आवरोळी -बिळकी रुद्रस्वामी मठाचे चन्नबसवदेव उपस्थित होते. कार्यक्रमाला बीईओ पी. रामाप्पा यांनी संबोधित केले आणि प्रास्ताविक केले. निवृत्त मुख्याध्यापक गंगाधर कोटागी आणि शोभा नायक यांनी व्याख्याने दिली. दिवंगत शिक्षकांच्या स्मृतिप्रीत्यर्थ निवृत्त शिक्षकांसाठी मौन पाळणे आणि सत्कार कार्यक्रम आयोजित करण्यात आला होता. यावेळी बीईओ रामाप्पा, क्षेत्र समन्वय अधिकारी अप्पाना अंबागी आणि अक्षरदासोह सहाय्यक संचालक महांतेश कित्तूर यांचा विविध शिक्षक संघटनांकडून सन्मान करण्यात आला.
या कार्यक्रमाला नगर पंचायत अध्यक्षा मीनाक्षी बैलूरकर, रामगुरुवाडी ग्रामपंचायत अध्यक्षा अनिता बालनावर, कर्मचारी संघटनेचे अध्यक्ष बी.एम. येल्लूर, प्राथमिक शाळा शिक्षक संघटनेचे अध्यक्ष एम.बी. चवलागी, प्राथमिक शाळा सेवारत पदवीधर शिक्षक संघटनेचे अध्यक्ष राजकुमार कुंभारा, एनपीएस कर्मचारी संघटनेचे अध्यक्ष रमेश कवळेकर, मुख्याध्यापक संघाचे अध्यक्ष के.एम. हवनावर, अपंग शिक्षक संघटनेचे अध्यक्ष विठ्ठल यकजनावर, शिक्षक सहकारी संघटनेचे अध्यक्ष एम.बी. गणगी, एनपीएस शिक्षक संघटनेचे अध्यक्ष किरण पाटील, मुस्लिम कर्मचारी कल्याण विकास संघटनेच्या अध्यक्षा अशपाखा पटेल, शिक्षण अधिकारी संघटनेचे अध्यक्ष शशिकांत घोरपडे, सावित्रीबाई फुले शिक्षक संघटनेचे अध्यक्ष जी.के. अनसूया, शारीरिक शिक्षण शिक्षक संघटनेचे अध्यक्ष चंद्रकांत भोसले, मध्यवर्ती मुख्यालय सी.आर.पी. बसवराज. जनकट्टी आणि इतर लोकप्रतिनिधी, शिक्षण विभागाचे अधिकारी, कर्मचारी, शिक्षक संघटनांचे पदाधिकारी, शिक्षक, गरम जेवणाचे कर्मचारी आणि इतर उपस्थित होते.
गुंजी सीआरपी बी.ए. देसाई यांनी ईशस्तवन सादर केले. संगोळी रायण्णा निवास शाळा, नंदागडच्या विद्यार्थ्यांनी राष्ट्रीय गीत गायले. तोपिनकट्टी शासकीय प्राथमिक शाळेतील मुलांनी स्वागत नृत्य सादर केले. क्षेत्र समन्वयक अप्पाण्णा अंबागी यांनी स्वागत केले. बीआरपी बाबूराव चचडी व शिक्षिका वैशाली काशिदा यांनी संकलन सादर केले. आयईआरटी समन्वयक शंकर कमार यांनी आभार मानले.
***
शिक्षक दिनाच्या समारंभात तालुक्यातील ३० क्लस्टरमधील ३० शिक्षकांना तालुकास्तरीय आदर्श शिक्षक पुरस्काराने सन्मानित करण्यात आले. एसएसएलसी परीक्षेत १०० टक्के गुण मिळवणाऱ्या विविध हायस्कूलमधील विषयनिहाय शिक्षकांचा सत्कार करण्यात आला. एमएलए मॉडेल स्कूलच्या शिक्षिका आय.एम. नदाफ आणि कटगली स्कूलच्या शिक्षिका सुदीपा हांडे यांना स्काउट्स गाईड्सकडून तालुकास्तरीय सेवारत्न पुरस्काराने सन्मानित करण्यात आले. तालुक्यातील विविध शाळांमधील स्काउट्स गाईड्सच्या मुलांना ग्रामपंचायतींकडून गणवेश वाटप करण्यात आले.
महत्त्वाच्या लोकांची अनुपस्थिती…..!
निमंत्रण पत्रात उल्लेख केलेले बहुतेक मान्यवर, ज्यात तहसीलदार, टीएपी ईओ आणि विधान परिषद सदस्य यांचा समावेश आहे, कार्यक्रमाला अनुपस्थित होते. आदर्श शिक्षक पुरस्कार तालुक्यातील ३० प्राथमिक शाळांमधील शिक्षकांना वाटप करण्यात आला, परंतु बहुतेक हायस्कूल शिक्षक कार्यक्रमापासून दूर राहिले आणि या पुरस्कारासाठी हायस्कूल शिक्षकांचा विचार न केल्यामुळे शिक्षक दिन साजरा समितीवर नाराजी व्यक्त केली.

ಖಾನಾಪುರ ತಾಲೂಕಿನ ಗುಡ್ಡಗಾಡು ಪ್ರದೇಶದಲ್ಲಿ ಕಾರ್ಯನಿರ್ವಹಿಸುವುದು ಶಿಕ್ಷಕರ ಪಾಲಿಗೆ ಸವಾಲಿನ ಕೆಲಸ : ಹಲಗೇಕರ
ಖಾನಾಪುರ: “ದಟ್ಟ ಅರಣ್ಯ, ಗುಡ್ಡುಗಾಡು ಪ್ರದೇಶದಿಂದ ಕೂಡಿರುವ ಈ ತಾಲೂಕಿನ ಕಾನನದಂಚಿನ ಭಾಗಕ್ಕೆ ತೆರಳಿ ಕಾರ್ಯನಿರ್ವಹಿಸುವುದು ಶಿಕ್ಷಕರ ಪಾಲಿಗೆ ಅತ್ಯಂತ ಸವಾಲಿನ ಕೆಲಸವಾಗಿದೆ. ಆದರೂ ತಾಲೂಕಿನ ಗಡಿಭಾಗದ ಶಾಲೆಗಳಲ್ಲಿ ಶಿಕ್ಷಕರು ಉತ್ಸಾಹದಿಂದ ಕಾರ್ಯನಿರ್ವಹಿಸಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆ” ಎಂದು ಶಾಸಕ ವಿಠ್ಠಲ ಹಲಗೇಕರ ಶ್ಲಾಘಿಸಿದರು.
ಪಟ್ಟಣದ ಶನಾಯಾ ಪಾಮ್ಸ್ ಸಭಾಗೃಹದಲ್ಲಿ ಶನಿವಾರ ಶಾಲಾ ಶಿಕ್ಷಣ ಇಲಾಖೆ, ತಾಲೂಕು ಪಂಚಾಯ್ತಿ ಮತ್ತು ತಾಲೂಕು ಆಡಳಿತಗಳ ಸಹಯೋಗದಲ್ಲಿ ಜರುಗಿದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದ ಅವರು ಬಳಿಕ ಮಾತನಾಡಿ, “ಮಕ್ಕಳಿಗೆ ಬುನಾದಿ ಶಿಕ್ಷಣ ಉತ್ತಮವಾಗಿದ್ದರೆ ಅವರ ಭವಿಷ್ಯ ಸುಭದ್ರವಾಗುತ್ತದೆ. ಪ್ರಾಥಮಿಕ ಶಾಲಾ ಶಿಕ್ಷಕರು ಗುಣಮಟ್ಟದ ಮತ್ತು ಪರಿಣಾಮಕಾರಿ ಶಿಕ್ಷಣವನ್ನು ನೀಡುವ ಅಗತ್ಯವಿದೆ. ಶಿಕ್ಷಣ ಇಲಾಖೆ ಶಿಕ್ಷಕರಿಗೆ ಹೊಸ-ಹೊಸ ನಿಯಮಗಳನ್ನು ವಿಧಿಸುತ್ತಿದೆ. ಆದರೂ ಶಿಕ್ಷಕರು ಮಕ್ಕಳ ಜ್ಞಾನ ವೃದ್ಧಿಗೆ ಸಮಯ ಮೀಸಲಿಟ್ಟು ಶಿಕ್ಷಕ ವೃತ್ತಿಗೆ ಇರುವ ಗೌರವ-ಘನತೆಯನ್ನು ಕಾಪಾಡಬೇಕು” ಎಂದು ಸೂಚಿಸಿದರು.
ಮಾಜಿ ರಾಷ್ಟ್ರಪತಿ ಎಸ್.ರಾಧಾಕೃಷ್ಣನ್ ಮತ್ತು ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸುವ ಮೂಲಕ ಶಿಕ್ಷಕರ ದಿನದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಅವರೊಳ್ಳಿ-ಬಿಳಕಿ ರುದ್ರಸ್ವಾಮಿ ಮಠದ ಚನ್ನಬಸವದೇವರು ಸಾನಿಧ್ಯ ವಹಿಸಿದ್ದರು. ಬಿಇಒ ಪಿ.ರಾಮಪ್ಪ ಕಾರ್ಯಕ್ರಮ ಉದ್ದೇಶಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿವೃತ್ತ ಪ್ರಾಚಾರ್ಯರಾದ ಗಂಗಾಧರ ಕೋಟಗಿ ಮತ್ತು ಶೋಭಾ ನಾಯ್ಕ ಉಪನ್ಯಾಸ ನೀಡಿದರು. ಇದೇ ಮೃತ ಶಿಕ್ಷಕರ ಸ್ಮರಣಾರ್ಥ ಮೌನಾಚರಣೆ ಮತ್ತು ಸೇವಾ ನಿವೃತ್ತ ಶಿಕ್ಷಕರ ಸನ್ಮಾನ ಕಾರ್ಯಕ್ರಮಗಳು ಜರುಗಿದವು. ಇದೇ ಸಂದರ್ಭದಲ್ಲಿ ವಿವಿಧ ಶಿಕ್ಷಕರ ಸಂಘಟನೆಗಳ ವತಿಯಿಂದ ಬಿ.ಇ.ಒ ರಾಮಪ್ಪ, ಕ್ಷೇತ್ರ ಸಮನ್ವಯ ಅಧಿಕಾರಿ ಅಪ್ಪಣ್ಣ ಅಂಬಗಿ ಮತ್ತು ಅಕ್ಷರದಾಸೋಹ ಸಹಾಯಕ ನಿರ್ದೇಶಕ ಮಹಾಂತೇಶ ಕಿತ್ತೂರ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಮೀನಾಕ್ಷಿ ಬೈಲೂರಕರ, ರಾಮಗುರವಾಡಿ ಗ್ರಾಪಂ ಅಧ್ಯಕ್ಷೆ ಅನಿತಾ ಬಾಳಣ್ಣವರ, ನೌಕರರ ಸಂಘದ ಅಧ್ಯಕ್ಷ ಬಿ.ಎಂ ಯಳ್ಳೂರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಬಿ ಚವಲಗಿ, ಪ್ರಾಥಮಿಕ ಶಾಲಾ ಸೇವಾನಿರತ ಪದವೀಧರ ಶಿಕ್ಷಕರ ಸಂಘದ ಅಧ್ಯಕ್ಷ ರಾಜಕುಮಾರ ಕುಂಬಾರ, ಎನ್.ಪಿ.ಎಸ್ ನೌಕರರ ಸಂಘದ ಅಧ್ಯಕ್ಷ ರಮೇಶ ಕವಳೆಕರ, ಪ್ರಧಾನ ಗುರುಗಳ ಸಂಘದ ಅಧ್ಯಕ್ಷ ಕೆ.ಎಂ ಹಾವಣ್ಣವರ, ಅಂಗವಿಕಲ ಶಿಕ್ಷಕರ ಸಂಘದ ಅಧ್ಯಕ್ಷ ವಿಠ್ಠಲ ಯಕಾಜನವರ, ಶಿಕ್ಷಕರ ಸಹಕಾರಿ ಸಂಘದ ಅಧ್ಯಕ್ಷ ಎಂ.ಬಿ ಗಾಣಗಿ, ಎನ್.ಪಿ.ಎಸ್ ಶಿಕ್ಷಕರ ಸಂಘದ ಅಧ್ಯಕ್ಷ ಕಿರಣ ಪಾಟೀಲ, ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಷ್ಪಾಖ ಪಟೇಲ, ಶಿಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷ ಶಶಿಕಾಂತ ಘೋರ್ಪಡೆ, ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಅಧ್ಯಕ್ಷೆ ಜಿ.ಕೆ ಅನಸೂಯಾ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಕಾಂತ ಭೋಸಲೆ, ಕೇಂದ್ರ ಸ್ಥಾನದ ಸಿ.ಆರ್.ಪಿ ಬಸವರಾಜ ಜನಕಟ್ಟಿ ಸೇರಿದಂತೆ ಜನಪ್ರತಿನಿಧಿಗಳು, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ಶಿಕ್ಷಕರ ಸಂಘಗಳ ಪದಾಧಿಕಾರಿಗಳು, ಶಿಕ್ಷಕರು, ಬಿಸಿಯೂಟ ಸಿಬ್ಬಂದಿ ಮತ್ತಿತರರು ಭಾಗವಹಿಸಿದ್ದರು.
ಗುಂಜಿ ಸಿ.ಆರ್.ಪಿ ಬಿ.ಎ ದೇಸಾಯಿ ಈಶಸ್ತವನ ಪ್ರಸ್ತುತಪಡಿಸಿದರು. ನಂದಗಡದ ಸಂಗೊಳ್ಳಿ ರಾಯಣ್ಣ ಸನಿವಾಸ ಶಾಲೆಯ ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು. ತೋಪಿನಕಟ್ಟಿ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳು ಸ್ವಾಗತ ನೃತ್ಯ ಪ್ರಸ್ತುತಪಡಿಸಿದರು. ಕ್ಷೇತ್ರ ಸಮನ್ವಯಾಧಿಕಾರಿ ಅಪ್ಪಣ್ಣ ಅಂಬಗಿ ಸ್ವಾಗತಿಸಿದರು. ಬಿ.ಆರ್.ಪಿ ಬಾಬುರಾವ್ ಚಚಡಿ ಹಾಗೂ ಶಿಕ್ಷಕಿ ವೈಶಾಲಿ ಕಾಶೀದ ನಿರೂಪಿಸಿದರು. ಐ.ಇ.ಆರ್.ಟಿ ಸಂಯೋಜಕ ಶಂಕರ ಕಮ್ಮಾರ ವಂದಿಸಿದರು.
***
ಬಾಕ್ಸ್
ಶಿಕ್ಷಕ ದಿನಾಚರಣೆ ಅಂಗವಾಗಿ ತಾಲೂಕಿನ 30 ಕ್ಲಸ್ಟರ್ ಗಳ ವ್ಯಾಪ್ತಿಯ 30 ಶಿಕ್ಷಕರಿಗೆ ತಾಲೂಕುಮಟ್ಟದ ಆದರ್ಶ ಶಿಕ್ಷಕ ಪುರಸ್ಕಾರ ವಿತರಿಸಿ ಗೌರವಿಸಲಾಯಿತು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವಿಷಯವಾರು ನೂರಕ್ಕೆ ನೂರು ಫಲಿತಾಂಶ ಗಳಿಸಿದ ವಿವಿಧ ಪ್ರೌಢಶಾಲೆಗಳ ವಿಷಯವಾರು ಶಿಕ್ಷಕರನ್ನು ಸತ್ಕರಿಸಲಾಯಿತು. ಶಾಸಕರ ಮಾದರಿ ಶಾಲೆಯ ಶಿಕ್ಷಕ ಐ.ಎಂ ನದಾಫ ಮತ್ತು ಕಾಟಗಾಳಿ ಶಾಲೆಯ ಶಿಕ್ಷಕಿ ಸುದೀಪಾ ಹಂಡೆ ಅವರಿಗೆ ಸ್ಕೌಟ್ಸ್ ಗೈಡ್ಸ್ ವತಿಯಿಂದ ತಾಲೂಕುಮಟ್ಟದ ಸೇವಾ ರತ್ನ ಪ್ರಶಸ್ತಿ ನೀಡಲಾಯಿತು. ತಾಲೂಕಿನ ವಿವಿಧ ಶಾಲೆಗಳ ಸ್ಕೌಟ್ಸ್ ಗೈಡ್ಸ್ ಮಕ್ಕಳಿಗೆ ಗ್ರಾಮ ಪಂಚಾಯ್ತಿಗಳಿಂದ ಸಮವಸ್ತ್ರಗಳನ್ನು ವಿತರಿಸಲಾಯಿತು.
ಪ್ರಮುಖರ ಗೈರು…..!
ಕಾರ್ಯಕ್ರಮದಲ್ಲಿ ತಹಸೀಲ್ದಾರ್, ತಾಪಂ ಇಒ, ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಆಹ್ವಾನ ಪತ್ರಿಕೆಯಲ್ಲಿ ನಮೂದಿಸಿದ ಗಣ್ಯರ ಪೈಕಿ ಬಹುತೇಕರು ಗೈರಾಗಿದ್ದರು. ತಾಲೂಕಿನ 30 ಪ್ರಾಥಮಿಕ ಶಾಲೆಗಳ ಶಿಕ್ಷಕರಿಗೆ ಆದರ್ಶ ಶಿಕ್ಷಕ ಪ್ರಶಸ್ತಿ ವಿತರಿಸಿದ್ದು, ಈ ಪ್ರಶಸ್ತಿಗೆ ಪ್ರೌಢಶಾಲೆಗಳ ಶಿಕ್ಷಕರನ್ನು ಪರಿಗಣಿಸಿಲ್ಲ ಎಂಬ ಕಾರಣದಿಂದ ಬಹುತೇಕ ಪ್ರೌಢಶಾಲಾ ಶಿಕ್ಷಕರು ಕಾರ್ಯಕ್ರಮದಿಂದ ದೂರವುಳಿದು ಶಿಕ್ಷಕರ ದಿನಾಚರಣೆ ಸಮಿತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
