खानापूर–कुटीनोनगर रस्त्याची दुरवस्था; ६९ लाखांचा निधी असूनही ब्रिजचे काम कुचकामी?
खानापूर : खानापूर शहरापासून अवघ्या चार किलोमीटर अंतरावर असलेल्या असोगा तीर्थक्षेत्रालगतच्या कुटीनोनगर तसेच भोसरगाळी गावांना जोडणाऱ्या रस्त्याची मोठ्या प्रमाणात दुरवस्था झाली आहे. रस्त्यावर खड्डे की खड्ड्यात रस्ता, अशी अवस्था निर्माण झाली असून अर्धवट कामामुळे अनेक ठिकाणी चिखलाचे साम्राज्य पसरले आहे.
या रस्त्यावरील एका नाल्यावर ब्रिज उभारण्यासाठी सुमारे ६९ लाख रुपयांचा निधी दोन वर्षांपूर्वी मंजूर करण्यात आला. मात्र, संबंधित सार्वजनिक बांधकाम विभागाच्या अभियंत्याने केलेल्या कथित चुकीच्या आराखड्यामुळे ब्रिजचे काम अपेक्षित दर्जाचे झाले नसल्याचा आरोप सामाजिक कार्यकर्ते निरूपदी कांबळे यांनी केला आहे.
ब्रिजची रुंदी केवळ १० ते १२ फूट असून, दोन्ही बाजूंना मातीचा भराव टाकून जोडरस्ता तयार करण्यात आला आहे. त्यामुळे या ठिकाणी वाहनधारकांना मोठा धोका निर्माण झाला आहे. विशेषतः वेगाने येणाऱ्या वाहनांसाठी हा भाग अपघाताचा सापळा ठरण्याची भीती ग्रामस्थांनी व्यक्त केली आहे.
रस्त्याच्या डांबरीकरणासाठी तसेच ब्रिजचे काम पूर्ण करण्यासाठी ग्रामस्थांनी अनेक वेळा लोकप्रतिनिधी आणि सार्वजनिक बांधकाम विभागाकडे अर्ज-विनंत्या केल्या. मात्र, अद्याप ठोस कार्यवाही झालेली नसल्याचा आरोप आहे.
चौकट : चुकीचा आराखडा करणाऱ्या अभियंत्यावर कारवाई करा — निरूपदी कांबळे
सामाजिक कार्यकर्ते निरूपदी कांबळे म्हणाले की, ६९ लाख रुपयांचा निधी मंजूर होऊनही ब्रिज व जोडरस्त्याचे काम योग्य पद्धतीने झालेले दिसत नाही. संबंधित अभियंत्याने केलेल्या आराखड्याची वरिष्ठ अधिकाऱ्यांनी तातडीने चौकशी करावी. कामात त्रुटी आढळल्यास जबाबदार अभियंत्यावर कारवाई करावी. तसेच ब्रिज व रस्त्याचे काम तातडीने पूर्ण करून ग्रामस्थांची गैरसोय दूर करावी.
कुटीनोनगर व भोसरगाळी परिसरातील ग्रामस्थांनीही सार्वजनिक बांधकाम विभागाच्या वरिष्ठ अधिकाऱ्यांनी या समस्येकडे तातडीने लक्ष देऊन रस्त्याचे डांबरीकरण आणि ब्रिजचे उर्वरित काम दर्जेदार पद्धतीने पूर्ण करावे, अशी मागणी केली आहे.
ಖಾನಾಪುರ–ಕುಟಿನೊನಗರ ರಸ್ತೆ ದುಸ್ಥಿತಿ: 69 ಲಕ್ಷ ರೂ. ಅನುದಾನ ಇದ್ದರೂ ಸೇತುವೆ ಕಾಮಗಾರಿ ಕಳಪೆ!
ಖಾನಾಪುರ : ಖಾನಾಪುರ ಪಟ್ಟಣದಿಂದ ಕೇವಲ ನಾಲ್ಕು ಕಿ.ಮೀ. ದೂರದಲ್ಲಿರುವ ಅಸೋಗಾ ತೀರ್ಥಕ್ಷೇತ್ರದ ಸಮೀಪದ ಕುಟೀನಗರ ಹಾಗೂ ಭೋಸರಗಾಳಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದೆ. ರಸ್ತೆಯಲ್ಲಿ ಗುಂಡಿಗಳೋ ಅಥವಾ ಗುಂಡಿಗಳಲ್ಲೇ ರಸ್ತೆಯೋ ಎಂಬಂತಾಗಿದ್ದು, ಮಳೆಯಿಂದಾಗಿ ಕೆಸರು ತುಂಬಿಕೊಂಡಿದೆ.
ಈ ರಸ್ತೆಯಲ್ಲಿನ ಹಳ್ಳಕ್ಕೆ ಸೇತುವೆ ನಿರ್ಮಾಣಕ್ಕಾಗಿ ಸುಮಾರು 69 ಲಕ್ಷ ರೂ. ಅನುದಾನ ಮಂಜೂರಾಗಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಆದರೆ ಕಾಮಗಾರಿ ಅರ್ಧಕ್ಕೆ ನಿಂತಿರುವುದರಿಂದ ವಾಹನ ಸವಾರರು ಹಾಗೂ ಗ್ರಾಮಸ್ಥರು ತೀವ್ರ ತೊಂದರೆ ಅನುಭವಿಸುವಂತಾಗಿದೆ.
ಸೇತುವೆಯ ಎರಡೂ ಬದಿಗಳಲ್ಲಿ ಮಣ್ಣಿನ ಭರ್ತಿ ಮಾಡಲಾಗಿದ್ದು, ಸಂಪರ್ಕ ರಸ್ತೆಯ ನಿರ್ಮಾಣ ಸಮರ್ಪಕವಾಗಿ ಪೂರ್ಣಗೊಂಡಿಲ್ಲ. ಮಳೆ ಬಂದಾಗ ರಸ್ತೆಯೆಲ್ಲ ಕೆಸರುಮಯವಾಗುತ್ತಿದ್ದು, ವಾಹನಗಳು ಸಂಚರಿಸುವುದು ಅಪಾಯಕಾರಿಯಾಗಿದೆ. ವೇಗವಾಗಿ ಬರುವ ವಾಹನಗಳಿಗೆ ಈ ಸ್ಥಳ ಅಪಘಾತದ ತಾಣವಾಗುವ ಆತಂಕವೂ ಗ್ರಾಮಸ್ಥರಲ್ಲಿ ಮೂಡಿದೆ.
ರಸ್ತೆ ಡಾಂಬರೀಕರಣ ಹಾಗೂ ಸೇತುವೆ ಕಾಮಗಾರಿ ಪೂರ್ಣಗೊಳಿಸುವಂತೆ ಗ್ರಾಮಸ್ಥರು ಹಲವು ಬಾರಿ ಜನಪ್ರತಿನಿಧಿಗಳು ಹಾಗೂ ಲೋಕೋಪಯೋಗಿ ಇಲಾಖೆಗೆ ಮನವಿ ಸಲ್ಲಿಸಿದ್ದರೂ ಸೂಕ್ತ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಆರೋಪಿಸಲಾಗಿದೆ.
ತಪ್ಪಾದ ವಿನ್ಯಾಸ ಮಾಡಿದ ಎಂಜಿನಿಯರ್ ವಿರುದ್ಧ ಕ್ರಮ ಕೈಗೊಳ್ಳಿ : ನಿರೂಪದಿ ಕಾಂಬಳೆ
ಸಾಮಾಜಿಕ ಕಾರ್ಯಕರ್ತ ನಿರೂಪದಿ ಕಾಂಬಳೆ ಮಾತನಾಡಿ, 69 ಲಕ್ಷ ರೂ. ಅನುದಾನ ಮಂಜೂರಾದರೂ ಕಾಮಗಾರಿ ಸಮರ್ಪಕವಾಗಿ ನಡೆಯುತ್ತಿಲ್ಲ. ಸೇತುವೆಯ ವಿನ್ಯಾಸ ಹಾಗೂ ಕಾಮಗಾರಿಯ ಗುಣಮಟ್ಟವನ್ನು ಹಿರಿಯ ಅಧಿಕಾರಿಗಳು ತಕ್ಷಣ ಪರಿಶೀಲಿಸಬೇಕು. ತಪ್ಪಾದ ವಿನ್ಯಾಸಕ್ಕೆ ಕಾರಣರಾದ ಸಂಬಂಧಪಟ್ಟ ಎಂಜಿನಿಯರ್ ವಿರುದ್ಧ ಕ್ರಮ ಕೈಗೊಳ್ಳಬೇಕು. ಸೇತುವೆ ಹಾಗೂ ಸಂಪರ್ಕ ರಸ್ತೆಯ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ ಗ್ರಾಮಸ್ಥರ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಕುಟೀನಗರ ಹಾಗೂ ಭೋಸರಗಾಳಿ ಗ್ರಾಮಸ್ಥರು ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿ, ರಸ್ತೆ ಮತ್ತು ಸೇತುವೆ ಕಾಮಗಾರಿಯನ್ನು ಗುಣಮಟ್ಟದೊಂದಿಗೆ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.