खानापूर : मुलाबरोबर बापाचाही मृत्यू!
गणेश चतुर्थीच्या तोंडावर लक्केबैल गावावर शोककळा; अज्ञात वाहनाच्या धडकेत बापलेकांचा दुर्दैवी अंत
खानापूर प्रतिनिधी : बेळगावला कामानिमित्त जात असलेल्या बापलेकांच्या दुचाकीला अज्ञात वाहनाने धडक दिल्याने मुलाचा जागीच मृत्यू झाला. तर गंभीर जखमी झालेल्या वडिलांचाही उपचारादरम्यान सोमवारी दुपारी दोनच्या सुमारास मृत्यू झाला. या दुर्दैवी घटनेमुळे गणेश चतुर्थीच्या तोंडावर लक्केबैल गावावर शोककळा पसरली आहे.
ही घटना सोमवारी सकाळी सातच्या सुमारास खानापूर तालुक्यातील लोकळी क्रॉस ते तोपिनकट्टी रस्त्यावरील वळणावर घडली. या अपघातात पुंडलिक अशोक नांदुरकर (वय २३, रा. लक्केबैल) यांचा जागीच मृत्यू झाला. तर त्यांचे वडील अशोक नांदुरकर (वय ६०) हे गंभीर जखमी झाले होते.
मिळालेल्या माहितीनुसार, पुंडलिक व अशोक नांदुरकर हे दोघे बापलेक दुचाकीवरून तोपिनकट्टी मार्गे बेळगावला काही कामानिमित्त जात होते. त्यावेळी समोरून आलेल्या एका अज्ञात टेम्पोने त्यांच्या दुचाकीला जोरदार धडक दिल्याचे समजते. धडकेनंतर टेम्पोचालक घटनास्थळावरून पसार झाल्याची माहिती आहे.
या धडकेत पुंडलिक यांच्या डोक्याला जबर मार लागल्याने त्यांचा जागीच मृत्यू झाला. तर अशोक नांदुरकर हे गंभीर अवस्थेत रस्त्यावर पडले होते. रस्त्यावरून जाणाऱ्या नागरिकांनी त्यांना पाहून तातडीने उपचारासाठी हलविण्याचा प्रयत्न केला. त्यानंतर त्यांना बेळगाव येथील सेंन्ट्रा केअर रुग्णालयात दाखल करण्यात आले होते. मात्र गंभीर दुखापतीमुळे उपचार सुरू असतानाच सोमवारी दुपारी दोनच्या सुमारास त्यांचा मृत्यू झाला.
पुंडलिक हे उद्यमबाग परिसरात नेहमी कामाला जात होते, तर त्यांचे वडील गवंडी काम करीत असल्याचे समजते.
रात्री सातनंतर दोघांवरही अंत्यसंस्कार
जागीच मृत्यू झालेल्या पुंडलिक यांचा मृतदेह खानापूर शासकीय रुग्णालयात शवविच्छेदनासाठी दाखल करण्यात आला होता. दुपारपर्यंत ही प्रक्रिया पूर्ण करण्यासाठी गावकऱ्यांची धडपड सुरू होती. त्याचवेळी गंभीर अवस्थेत असलेल्या अशोक नांदुरकर यांच्या प्रकृतीबाबत कुटुंबीय चिंतेत होते.
एकीकडे मुलाचा मृत्यू, तर दुसरीकडे पतीच्या प्रकृतीची धाकधूक, अशा दुहेरी संकटामुळे नांदुरकर कुटुंबीय पूर्णतः हतबल झाले आहेत. अशोक नांदुरकर यांचा मृतदेह सेंन्ट्रा केअर रुग्णालयातून खानापूर येथे शवविच्छेदनासाठी आणण्यात येणार असून, प्रक्रिया पूर्ण झाल्यानंतर सोमवारी रात्री सातनंतर लक्केबैल येथे बापलेकांवर अंत्यसंस्कार होणार असल्याची माहिती आहे.
या घटनेचा खानापूरचे पोलीस निरीक्षक लालसाब गौडी यांच्या मार्गदर्शनाखाली पुढील तपास सुरू आहे. अज्ञात वाहनाचा शोध घेण्यासाठी पोलीस प्रयत्न करीत आहेत.
या दुर्दैवी घटनेमुळे लक्केबैल व लोकळी परिसरात हळहळ व्यक्त होत आहे.
ಖಾನಾಪುರ: ಮಗನ ಬೆನ್ನಲ್ಲೇ ತಂದೆಯೂ ಸಾವು!
ಗಣೇಶ ಚತುರ್ಥಿ ಮುನ್ನ ಲಕ್ಕೇಬೈಲ್ ಗ್ರಾಮದಲ್ಲಿ ಶೋಕದ ಛಾಯೆ
ಅಪರಿಚಿತ ವಾಹನದ ಡಿಕ್ಕಿಗೆ ಬಾಪ-ಮಗ ಬಲಿ; ತೋಪಿನಕಟ್ಟಿ ರಸ್ತೆಯಲ್ಲಿ ದುರಂತ
ಖಾನಾಪುರ ಪ್ರತಿನಿಧಿ : ಗಣೇಶ ಚತುರ್ಥಿಯ ಸಂಭ್ರಮದ ಮುನ್ನವೇ ಖಾನಾಪುರ ತಾಲೂಕಿನ ಲಕ್ಕೇಬೈಲ್ ಗ್ರಾಮದಲ್ಲಿ ದುಃಖದ ಛಾಯೆ ಆವರಿಸಿದೆ. ಬೆಳಗಾವಿಗೆ ಕೆಲಸದ ನಿಮಿತ್ತ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ತಂದೆ-ಮಗನ ವಾಹನಕ್ಕೆ ಅಪರಿಚಿತ ಟೆಂಪೊ ಡಿಕ್ಕಿ ಹೊಡೆದ ಪರಿಣಾಮ, ಮಗ ಸ್ಥಳದಲ್ಲೇ ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡಿದ್ದ ತಂದೆಯೂ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಮೃತಪಟ್ಟಿದ್ದಾರೆ.
ಈ ದುರ್ಘಟನೆ ಸೋಮವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಖಾನಾಪುರ ತಾಲೂಕಿನ ಲೋಕೋಳಿ ಕ್ರಾಸ್–ತೋಪಿನಕಟ್ಟಿ ರಸ್ತೆಯ ತಿರುವಿನಲ್ಲಿ ಸಂಭವಿಸಿದೆ. ಮೃತರನ್ನು ಪುಂಡಲಿಕ ಅಶೋಕ ನಾಂದುರಕರ (23, ಲಕ್ಕೇಬೈಲ್) ಎಂದು ಗುರುತಿಸಲಾಗಿದೆ. ಅವರ ತಂದೆ ಅಶೋಕ ನಾಂದುರಕರ (60) ಅವರು ಗಂಭೀರವಾಗಿ ಗಾಯಗೊಂಡಿದ್ದರು.
ಲಭ್ಯವಾದ ಮಾಹಿತಿಯ ಪ್ರಕಾರ, ಪುಂಡಲಿಕ ಹಾಗೂ ಅಶೋಕ ನಾಂದುರಕರ ಇಬ್ಬರೂ ದ್ವಿಚಕ್ರ ವಾಹನದಲ್ಲಿ ತೋಪಿನಕಟ್ಟಿ ಮಾರ್ಗವಾಗಿ ಬೆಳಗಾವಿಗೆ ತೆರಳುತ್ತಿದ್ದರು. ಈ ವೇಳೆ ಎದುರಿನಿಂದ ಬಂದ ಅಪರಿಚಿತ ಟೆಂಪೊ ಅವರ ವಾಹನಕ್ಕೆ ಬಲವಾಗಿ ಡಿಕ್ಕಿ ಹೊಡೆದು ಸ್ಥಳದಿಂದ ಪರಾರಿಯಾಗಿದೆ ಎನ್ನಲಾಗಿದೆ.
ಡಿಕ್ಕಿಯ ರಭಸಕ್ಕೆ ಪುಂಡಲಿಕ ಅವರ ತಲೆಗೆ ಗಂಭೀರ ಗಾಯವಾಗಿದ್ದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರ ಸ್ಥಿತಿಯಲ್ಲಿ ರಸ್ತೆ ಬದಿಯಲ್ಲಿ ಬಿದ್ದಿದ್ದ ಅಶೋಕ ನಾಂದುರಕರ ಅವರನ್ನು ದಾರಿಹೋಕರು ಗಮನಿಸಿ, ತುರ್ತು ಚಿಕಿತ್ಸೆಗಾಗಿ ಬೆಳಗಾವಿಯ ಸೆಂಟ್ರಾ ಕೇರ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಗಂಭೀರ ಗಾಯಗಳಿಂದಾಗಿ ಚಿಕಿತ್ಸೆ ಫಲಕಾರಿಯಾಗದೆ ಅವರು ಸೋಮವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ.
ಪುಂಡಲಿಕ ಅವರು ಉದ್ಯಮಬಾಗ್ ಪ್ರದೇಶದಲ್ಲಿ ಕೆಲಸಕ್ಕೆ ತೆರಳುತ್ತಿದ್ದರು. ಅವರ ತಂದೆ ಅಶೋಕ ಅವರು ಗಾರೆ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ರಾತ್ರಿ 7 ಗಂಟೆಯ ನಂತರ ಅಂತ್ಯಸಂಸ್ಕಾರ
ಸ್ಥಳದಲ್ಲೇ ಮೃತಪಟ್ಟ ಪುಂಡಲಿಕ ಅವರ ಮೃತದೇಹವನ್ನು ಖಾನಾಪುರ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ದಾಖಲಿಸಲಾಗಿತ್ತು. ಮಧ್ಯಾಹ್ನದವರೆಗೆ ಪ್ರಕ್ರಿಯೆ ಪೂರ್ಣಗೊಳಿಸಲು ಗ್ರಾಮಸ್ಥರು ಪ್ರಯತ್ನ ನಡೆಸುತ್ತಿದ್ದರು. ಇದೇ ವೇಳೆ, ಗಂಭೀರ ಸ್ಥಿತಿಯಲ್ಲಿದ್ದ ಅಶೋಕ ನಾಂದುರಕರ ಅವರ ಆರೋಗ್ಯದ ಬಗ್ಗೆ ಕುಟುಂಬಸ್ಥರು ಆತಂಕದಲ್ಲಿದ್ದರು.
ಒಂದೆಡೆ ಮಗನನ್ನು ಕಳೆದುಕೊಂಡ ನೋವು, ಮತ್ತೊಂದೆಡೆ ಪತಿಯ ಸಾವಿನ ಆಘಾತ—ಈ ದುಃಖದ ಸಂದರ್ಭದಲ್ಲಿ ನಾಂದುರಕರ ಕುಟುಂಬಸ್ಥರು ಸಂಪೂರ್ಣವಾಗಿ ಕಂಗಾಲಾಗಿದ್ದಾರೆ. ಅಶೋಕ ನಾಂದುರಕರ ಅವರ ಮೃತದೇಹವನ್ನು ಸೆಂಟ್ರಾ ಕೇರ್ ಆಸ್ಪತ್ರೆಯಿಂದ ಖಾನಾಪುರಕ್ಕೆ ತರಲಾಗುತ್ತಿದ್ದು, ಮರಣೋತ್ತರ ಪರೀಕ್ಷೆ ಪೂರ್ಣಗೊಂಡ ಬಳಿಕ ಸೋಮವಾರ ರಾತ್ರಿ 7 ಗಂಟೆಯ ನಂತರ ಲಕ್ಕೇಬೈಲ್ನಲ್ಲಿ ತಂದೆ-ಮಗ ಇಬ್ಬರ ಅಂತ್ಯಸಂಸ್ಕಾರ ನಡೆಯಲಿದೆ ಎಂದು ತಿಳಿದುಬಂದಿದೆ.
ಘಟನೆಯ ಕುರಿತು ಖಾನಾಪುರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಲಾಲಸಾಬ್ ಗೌಡಿ ಅವರು ಪಂಚನಾಮೆ ನಡೆಸಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ. ಅಪರಿಚಿತ ವಾಹನದ ಪತ್ತೆಗೆ ಪೊಲೀಸರು ಪ್ರಯತ್ನಿಸುತ್ತಿದ್ದಾರೆ.
ಈ ದುರ್ಘಟನೆಯಿಂದ ಲಕ್ಕೇಬೈಲ್ ಹಾಗೂ ಲೋಕೋಳಿ ಸುತ್ತಮುತ್ತಲಿನ ಪ್ರದೇಶದಲ್ಲಿ ತೀವ್ರ ಶೋಕ ವ್ಯಕ್ತವಾಗಿದೆ.