Oplus_16777216
खानापुरात पत्रकार दिन उत्साहात..!


: खानापूर : जेष्ठ पत्रकारांचा सत्कार करताना जिल्हाधिकारी मोहम्मद रोशन, आमदार विठ्ठल हलगेकर, आमदार चन्नराज हट्टीहोळी, माजी आमदार दिगंबर पाटील, माजी आमदार अरविंद पाटील, दिलीप कुरुंदवाडे, पिराजी कुराडे, कासीम हट्टीहोळी व इतर.
खानापूर लाईव्ह न्युज/ प्रतिनिधी :
देशाची एकता आणि अखंडता अबाधित राखण्यात विधायक पत्रकारितेने मोठे योगदान दिले आहे. लोकशाहीचा चौथा खांब म्हणून असलेली बिरुदावली सार्थ ठरविताना निडर आणि झुंजार पत्रकारांनी जनतेचा लोकशाहीवरील विश्वास अबाधित ठेवण्याचे काम केले आहे. पत्रकारितेत समाज परिवर्तनाचे मोठे सामर्थ्य आहे. ते ओळखून पत्रकारांनी आपल्या जबाबदारीशी प्रामाणिक राहावे असे प्रतिपादन जिल्हाधिकारी मोहम्मद रोशन यांनी केले.
राज्य श्रमिक पत्रकार संघटनेच्या खानापूर शाखेच्या वतीने आयोजित पत्रकार दिन आणि जेष्ठ पत्रकारांच्या सत्कार सोहळ्यात ते बोलत होते. अध्यक्षस्थानी पत्रकार संघाचे ज्येष्ठ सदस्य पिराजी कुऱ्हाडे होते.
जिल्हाधिकारी रोशन म्हणाले, खानापूर तालुक्यातील जनतेच्या प्रश्नांचे पत्रकारांनी उत्तम रीतीने प्रतिनिधित्व केले आहे. अनेक अडचणींचा सामना करत लोकजागराची भूमिका निष्ठेने बजावली आहे. दुर्गमतेमुळे येथे पत्रकारिता करणे आव्हानात्मक आहे. तरीही आपल्या जबाबदारीला न्याय देताना येथील धडपडी पत्रकार कधीही कमी पडलेला नसल्याचे उद्गार त्यांनी काढले.
आमदार विठ्ठल हलगेकर म्हणाले, समाजातील उणीवांवर नेमकेपणाने बोट ठेवत असताना चांगल्या कामांचीही पत्रकारांनी दखल घ्यावी. आमदार चन्नराज हट्टिहोळी म्हणाले, जनतेच्या समस्यांना वाचा फोडून सरकारला जाग आणण्याचे काम पत्रकार करतो. त्याच्यामुळे सर्वसामान्यांना जलद गतीने न्याय मिळतो. माजी आमदार अरविंद पाटील यांनी, शेतकऱ्यांच्या प्रश्नांसाठी पत्रकारांनी लेखणी चालवावी अशी अपेक्षा व्यक्त केली. तालुक्यातील दीड हजारहून अधिक शेतकऱ्यांच्या पीक व स्वसंरक्षणाच्या बंदुकांचे परवाने विना विलंब नूतनीकरण करून द्यावेत अशी जिल्हाधिकाऱ्यांकडे मागणी केली.
यावेळी जेष्ठ पत्रकार प्रकाश देशपांडे, जगदीश होसमणी, वसंत काळगे यांच्यासह वृत्तपत्र विक्रेते सुरेश खडपे यांचा सत्कार करण्यात आला. तालुका संघटनेच्या अध्यक्षपदी कासीम हट्टीहोळी, उपाध्यक्षपदी वासुदेव चौगुले, सचिव पदी प्रसन्न कुलकर्णी, जिल्हा प्रतिनिधी म्हणून रुद्रेश संपगावी यांची निवड करण्यात आली. त्यांच्यासह इतर पदाधिकाऱ्यांना जिल्हाध्यक्ष कुरुंदवाडे यांनी ओळखपत्रे बहाल केली. कार्यक्रमाला म. ए. समितीचे अध्यक्ष गोपाळ देसाई, ग्रामीण काँग्रेसचे अध्यक्ष ईश्वर घाडी, शहर अध्यक्ष महांतेश राऊत, भाजपचे अध्यक्ष बसवराज सानिकोप, जिल्हा उपाध्यक्ष प्रमोद कोचेरी, खानापूर बँकेचे चेअरमन अमृत शेलार, संचालक बाळासाहेब शेलार, प्रकाश चव्हाण, मुरलीधर पाटील, के. पी. पाटील, बाबुराव देसाई, शंकर पाटील, प्रसाद पाटील, नारायण कापोलकर, एम. बी. वाली आदी उपस्थित होते.

पत्रकार भवनासाठी जागा द्या

पत्रकार भवनासाठी खानापूर शहराच्या ठिकाणी सरकारने जागा उपलब्ध करून द्यावी. बेळगावच्या धर्तीवर खानापूर नगरपंचायतीने पत्रकारांना आरोग्य विमा योजनेचा लाभ द्यावा अशी मागणी जिल्हाधिकाऱ्यांकडे निवेदनाद्वारे करण्यात आली.
ಪತ್ರಕರ್ತರು ಬೆಳಗಾವಿಯಲ್ಲಿ ಹಾಗೂ ಖಾನಾಪುರದಲ್ಲಿ ಮಾಡುವ ಕೆಲಸದಲ್ಲಿ ವ್ಯತ್ಯಾಸವಿದೆ: ಮೊಹಮ್ಮದ ರೋಷನ್
ಖಾನಾಪುರ: “ಪತ್ರಕರ್ತರು ಬೆಳಗಾವಿಯಲ್ಲಿ ಕೆಲಸ ನಿರ್ವಹಿಸುವುದು ಸುಲಭ ಆದರೆ ಖಾನಾಪುರದಂತಹ ಬೆಟ್ಟಗುಡ್ಡ ಹಾಗೂ ದಟ್ಟ ಅರಣ್ಯ ಪ್ರದೇಶದಿಂದ ಸುತ್ತುವರೆದಿರುವ ಪ್ರದೇಶದಲ್ಲಿ ಕಾರ್ಯನಿರ್ವಹಿಸುವುದು ಅತ್ಯಂತ ಸವಾಲಿನ ಕೆಲಸ” ಎಂದು ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಅಭಿಪ್ರಾಯ ಪಟ್ಟರು.

ಪಟ್ಟಣದ ಶಿವಸ್ಮಾರಕ ಸಭಾಗೃಹದಲ್ಲಿ ಶನಿವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಏರ್ಪಡಿಸಿದ್ದ ತಾಲ್ಲೂಕುಮಟ್ಟದ ಪತ್ರಿಕಾ ದಿನಾಚರಣೆ, ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ, ತಾಲ್ಲೂಕಿನ ಹಿರಿಯ ಪತ್ರಕರ್ತರ ಹಾಗೂ ಹಿರಿಯ ಪತ್ರಿಕಾ ವಿತರಕರ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, “ದಟ್ಟ ಕಾನನದಿಂದ ಸುತ್ತುವರೆದಿರುವ ಈ ತಾಲ್ಲೂಕು ನಿಸರ್ಗದತ್ತ ಪ್ರಕೃತಿಯಿಂದ ಶ್ರೀಮಂತವಾಗಿದೆ. ಅರಣ್ಯ ಪ್ರದೇಶದಲ್ಲಿ ವನ್ಯಜೀವಿ-ಮಾನವ ಸಂಘರ್ಷದ ಸಂದರ್ಭಗಳಲ್ಲಿ ಪತ್ರಕರ್ತರು ದಿಟ್ಟತನದಿಂದ ವರದಿ ಮಾಡುವ ಪ್ರಸಂಗಗಳು ಎದುರಾಗುತ್ತವೆ. ಈ ಭಾಗದಲ್ಲಿ ಪತ್ರಕರ್ತರ ಸಂಘವು ಎಲ್ಲ ಭಾಷೆಯ ಪತ್ರಕರ್ತರನ್ನು ಸಂಘಟಿಸಿ ಎಲ್ಲರೊಂದಿಗೆ ಸಮನ್ವಯ ಸಾಧಿಸಿ ಕೆಲಸ ಮಾಡುತ್ತಿರುವುದು ಖುಷಿಯ ವಿಷಯ” ಎಂದರು.
ಶಾಸಕ ವಿಠ್ಠಲ ಹಲಗೇಕರ ಮಾತನಾಡಿ, “ಖಾನಾಪುರ ತಾಲ್ಲೂಕಿನ ಪತ್ರಕರ್ತರು ತಮ್ಮ ನೈಜ ವರದಿಗಳ ಮೂಲಕ ಸರ್ಕಾರವನ್ನು ಎಚ್ಚರಿಸಿ ಜನಸೇವೆ ಮಾಡುತ್ತಿದ್ದಾರೆ” ಎಂದರು. ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾತನಾಡಿ, “ಪತ್ರಕರ್ತರು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳನ್ನು ತಮ್ಮ ಹರಿತವಾದ ಬರವಣಿಗೆಯಿಂದ ಎಚ್ಚರಿಸುವ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡುತ್ತಿದ್ದಾರೆ” ಎಂದು ಶ್ಲಾಘಿಸಿದರು.
ಕಾರ್ಯಕ್ರಮದ ಅಂಗವಾಗಿ 42 ವರ್ಷಗಳ ಕಾಲ ತರುಣಭಾರತ ದಿನಪತ್ರಿಕೆಯ ವರದಿಗಾರರಾಗಿ ಕಾರ್ಯನಿರ್ವಹಿಸಿದ ಪ್ರಕಾಶ ದೇಶಪಾಂಡೆ ಹಾಗೂ ವಿವಿಧ ಕನ್ನಡ ದಿನಪತ್ರಿಕೆಗಳ ವರದಿಗಾರರಾಗಿ ಕಾರ್ಯನಿರ್ವಹಿಸಿದ ಜಗದೀಶ ಹೊಸಮನಿ ಸೇರಿದಂತೆ ತಾಲ್ಲೂಕಿನ ಗ್ರಾಮೀಣ ಭಾಗದ ದಿನಪತ್ರಿಕೆ ವಿತರಕರನ್ನು ಸಂಘದ ವತಿಯಿಂದ ಗೌರವಿಸಿ ಸತ್ಕರಿಸಲಾಯಿತು. ಪತ್ರಕರ್ತರಿಗೆ ತಾಲ್ಲೂಕು ಕೇಂದ್ರದಲ್ಲಿ ಪತ್ರಿಕಾ ಭವನ ನಿರ್ಮಿಸಲು ನಿವೇಶನ ಒದಗಿಸಬೇಕು ಮತ್ತು ಬೆಳಗಾವಿ ಮಹಾನಗರಪಾಲಿಕೆ ಮಾದರಿಯಂತೆ ಖಾನಾಪುರದ ಪತ್ರಕರ್ತರಿಗೆ ಆರೋಗ್ಯವಿಮೆ ಸೇವೆಯನ್ನು ನೀಡಬೇಕು ಎಂದು ಸಂಘದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ದಿಲೀಪ ಕುರಂದವಾಡೆ, ಮಾಜಿ ಶಾಸಕರಾದ ಅರವಿಂದ ಪಾಟೀಲ, ದಿಗಂಬರ ಪಾಟೀಲ ಮಾತನಾಡಿದರು. ಕಾರ್ಯಕ್ರಮದಲ್ಲಿ ತಾಲ್ಲೂಕಿನ ವಿವಿಧ ಕ್ಷೇತ್ರಗಳ ಗಣ್ಯರು, ಅಧಿಕಾರಿಗಳು, ಸಿಬ್ಬಂದಿ, ರಾಜಕೀಯ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು. ವಿವೇಕ ಕುರಗುಂದ ಕಾರ್ಯಕ್ರಮ ನಿರ್ವಹಿಸಿದರು. ಶಾಸಕರ ಮಾದರಿ ಕನ್ನಡ ಶಾಲೆಯ ಮಕ್ಕಳು ನಾಡಗೀತೆ ಹಾಡಿದರು. ಕಾಶೀಮ ಹಟ್ಟಿಹೊಳಿ ಸ್ವಾಗತಿಸಿದರು. ಪಿರಾಜಿ ಕುರಾಡೆ ಪ್ರಾಸ್ತಾವಿಕ ಮಾತನಾಡಿದರು. ಪ್ರಸನ್ನ ಕುಲಕರ್ಣಿ ವಂದಿಸಿದರು.


