खानापूर : प्रतिनिधी
के.एल.ई. सोसायटीच्या एम. एस. होसमनी पूर्वपदवी महाविद्यालयात वार्षिक क्रीडा स्पर्धा मोठ्या उत्साहात आणि जल्लोषात पार पडल्या.
या कार्यक्रमाचे प्रमुख पाहुणे म्हणून ख्यातनाम धावपटू, ट्रिपल जंपपटू तसेच ‘खेलो इंडिया’ सुवर्णपदक विजेते सुनील हेंडुरी उपस्थित होते. विद्यार्थ्यांना मार्गदर्शन करताना त्यांनी, “खेळामुळे शिस्त, सांघिक भावना आणि देशभक्तीची जाणीव वाढते. प्रत्येक विद्यार्थ्याने क्रीडा क्षेत्रात सक्रिय सहभाग घ्यावा,” असे आवाहन केले.
कार्यक्रमाच्या अध्यक्षस्थानी महाविद्यालयाचे प्राचार्य विजय एम. कलमठ होते. अध्यक्षीय भाषणात त्यांनी, “शिक्षणाबरोबरच खेळांनाही तितकेच महत्त्व दिले पाहिजे. निरोगी शरीरातच निरोगी मन वास करते,” असे सांगितले.
महाविद्यालयाचे शारीरिक शिक्षण संचालक के. व्ही. पाटील यांनी विद्यार्थ्यांना क्रीडा शपथ दिली. “आम्ही न्याय्य पद्धतीने आणि क्रीडाभावनेने खेळू,” अशी शपथ सर्व विद्यार्थ्यांनी सामूहिकरित्या घेतली.
यावेळी व्ही. के. पुजार हे देखील उपस्थित होते.
कार्यक्रमाचे विशेष आकर्षण म्हणजे, मागील वर्षी खानापूर तालुका कबड्डी स्पर्धेत विजेते ठरलेल्या नमन पाटील आणि त्यांच्या संघाने क्रीडा ज्योत प्रज्वलित केली. या ज्योतीने क्रीडा स्पर्धांना उत्साहपूर्ण सुरुवात झाली.
दिवसभर विविध क्रीडा स्पर्धांचे आयोजन करण्यात आले होते. विद्यार्थ्यांनी मोठ्या उत्साहाने सहभाग घेत आपल्या क्रीडा कौशल्याचे प्रदर्शन केले. विविध स्पर्धांमधील विजेत्या खेळाडूंना प्रमुख पाहुण्यांच्या हस्ते पारितोषिके प्रदान करण्यात आली.
या कार्यक्रमाला महाविद्यालयातील प्राध्यापक, शिक्षकेतर कर्मचारी तसेच मोठ्या संख्येने विद्यार्थी उपस्थित होते.
ಕೆ.ಎಲ್.ಇ. ಎಂ.ಎಸ್. ಹೊಸಮನಿ ಪದವಿ ಪೂರ್ವ ಕಾಲೇಜಿನಲ್ಲಿ ವಾರ್ಷಿಕ ಕ್ರೀಡಾಕೂಟ ವಿಜೃಂಭಣೆ
ಖಾನಾಪುರ: ಕೆ.ಎಲ್.ಇ. ಸೊಸೈಟಿಯ ಎಂ.ಎಸ್. ಹೊಸಮನಿ ಪದವಿ ಪೂರ್ವ ಕಾಲೇಜಿನಲ್ಲಿ ವಾರ್ಷಿಕ ಕ್ರೀಡಾಕೂಟವು ಅತ್ಯಂತ ವಿಜೃಂಭಣೆಯಿಂದ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕ್ರೀಡಾಪಟು/ಓಟಗಾರ/ಟ್ರಿಪಲ್ ಜಂಪರ್ ಮತ್ತು ಖೇಲೋ ಇಂಡಿಯಾ ಚಿನ್ನದ ಪದಕ ವಿಜೇತ ಶ್ರೀ ಸುನೀಲ್ ಹೆಂಡೂರಿ ಅವರು ಭಾಗವಹಿಸಿದ್ದರು. ಕ್ರೀಡಾಪಟುಗಳನ್ನು ಉದ್ದೇಶಿಸಿ ಮಾತನಾಡಿದ ಅವರು, “ಕ್ರೀಡೆಯಿಂದ ಶಿಸ್ತು, ತಂಡದ ಮನೋಭಾವ ಮತ್ತು ದೇಶಭಕ್ತಿ ಬೆಳೆಯುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಕ್ರೀಡೆಯಲ್ಲಿ ಭಾಗವಹಿಸಬೇಕು” ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷೀಯ ಭಾಷಣವನ್ನು ಕಾಲೇಜಿನ ಪ್ರಾಚಾರ್ಯರಾದ ಶ್ರೀ ವಿಜಯ್ ಎಂ. ಕಲಮಠ ಅವರು ಮಾಡಿದರು. ಅವರು ಮಾತನಾಡಿ, “ಶಿಕ್ಷಣದ ಜೊತೆಗೆ ಕ್ರೀಡೆಗೂ ಸಮಾನ ಪ್ರಾಮುಖ್ಯತೆ ನೀಡಬೇಕು. ಆರೋಗ್ಯಕರ ದೇಹದಲ್ಲಿ ಮಾತ್ರ ಆರೋಗ್ಯಕರ ಮನಸ್ಸು ಇರುತ್ತದೆ” ಎಂದು ಹೇಳಿದರು.
ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ಕೆ.ವಿ. ಪಾಟೀಲ ಅವರು ಕ್ರೀಡಾಪಟುಗಳಿಗೆ ಕ್ರೀಡಾ ಪ್ರತಿಜ್ಞೆ ಬೋಧಿಸಿದರು. “ನಾವು ನ್ಯಾಯಯುತವಾಗಿ, ಕ್ರೀಡಾ ಮನೋಭಾವದಿಂದ ಆಡುತ್ತೇವೆ” ಎಂದು ವಿದ್ಯಾರ್ಥಿಗಳೆಲ್ಲರೂ ಒಟ್ಟಾಗಿ ಪ್ರತಿಜ್ಞೆ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ವಿ.ಕೆ. ಪೂಜಾರ ಅವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ, ಕಳೆದ ವರ್ಷ ಖಾನಾಪುರ ತಾಲೂಕಾ ಕಬಡ್ಡಿ ಪಂದ್ಯದಲ್ಲಿ ವಿಜೇತರಾದ ನಮನ್ ಪಾಟೀಲ ಮತ್ತು ಅವರ ತಂಡ ಅವರು ಕ್ರೀಡಾ ಜ್ಯೋತಿಯನ್ನು ಬೆಳಗಿಸಿದರು. ಇದರಿಂದ ಕ್ರೀಡಾಂಗಣಕ್ಕೆ ಚಾಲನೆ ದೊರೆತಂತಾಯಿತು.
ದಿನವಿಡೀ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆದವು. ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ತಮ್ಮ ಕ್ರೀಡಾ ಕೌಶಲ್ಯ ಪ್ರದರ್ಶಿಸಿದರು. ವಿಜೇತರಿಗೆ ಮುಖ್ಯ ಅತಿಥಿಗಳು ಬಹುಮಾನ ವಿತರಿಸಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.