गॅरंटी योजनांच्या अंमलबजावणीचा आढावा; चोर्ला बस दोन-तीन दिवसांत सुरू होणार
खानापूर : तालुका पंचहमी गॅरंटी योजना अंमलबजावणी समितीची आढावा बैठक अध्यक्ष सूर्यकांत कुलकर्णी यांच्या अध्यक्षतेखाली पार पडली. बैठकीत विविध गॅरंटी योजनांच्या अंमलबजावणीचा अधिकाऱ्यांकडून आढावा घेण्यात आला. समिती सदस्यांनी विविध समस्या मांडून अधिकाऱ्यांना आवश्यक सूचना केल्या.
गृहलक्ष्मी योजनेची माहिती देताना सीडीपीओ विक्रम के. बी. व सुपरवायझर मंजुळा टोने यांनी सांगितले की, तालुक्यातील गृहलक्ष्मी योजनेच्या 608 लाभार्थी महिलांचे निधन झाले आहे. त्यापैकी 159 महिलांच्या सुनांनी आपल्या नावाने नवीन अर्ज करून योजनेचा लाभ सुरू केला आहे. उर्वरित 449 मृत लाभार्थींच्या खात्यांवर बँकेत सुमारे 12 लाख, तर पोस्ट खात्यात 4.20 लाख रुपये जमा आहेत. त्यापैकी 2 लाख 48 हजार 800 रुपये सरकारकडे परत करण्यात आले असून, उर्वरित रक्कम परत करण्यासाठी संबंधित बँकांना पत्रे पाठविण्यात आली आहेत. सध्या तालुक्यात 63,682 लाभार्थी असून दरमहा सुमारे 7 कोटी 27 लाख रुपये लाभार्थींना मिळतात.
शक्ती योजनेअंतर्गत जुलैमध्ये महिलांनी 6,40,576 मोफत प्रवास केले असून, तिकिटांची रक्कम 1 कोटी 70 लाख 85 हजार 246 रुपये झाली आहे. सदस्य प्रियांका गावकर यांनी चोर्ला बससेवेचा प्रश्न उपस्थित केला. त्यावर डेपो नियंत्रक दुर्गावी यांनी दोन-तीन दिवसांत बस सुरू करण्याचे आश्वासन दिले. अध्यक्ष कुलकर्णी यांनी बस सुरू न झाल्यास हा प्रश्न राज्य गॅरंटी योजना अध्यक्ष रेवण्णा यांच्याकडे मांडण्याचा इशारा दिला.
गृहज्योती योजनेत ऑगस्टमध्ये 2 कोटी 20 लाख रुपयांचे वीज बिल माफ झाल्याची माहिती अधिकारी प्रवीण बरगाळे यांनी दिली. तालुक्यात 6,612 पुनर्रचना बाकी असल्याचेही त्यांनी सांगितले.
बैठकीला रुद्राप्पा पाटील, विवेक तडकोड, दीपा पाटील, प्रकाश मादार, शांताराम गुरव, इसाखान पठाण, जगदीश पाटील, युसूफ हारगी, संजय गावडे, राजा कुडाळे, गोविंद पाटील व रमेश मैत्री उपस्थित होते.
ಯೋಜನೆಗಳ ಅನುಷ್ಠಾನ ಪ್ರಗತಿ ಪರಿಶೀಲನೆ; ಚೋರ್ಲಾ ಬಸ್ ಎರಡು-ಮೂರು ದಿನಗಳಲ್ಲಿ ಆರಂಭ
ಖಾನಾಪುರ : ತಾಲ್ಲೂಕು ಪಂಚಹಮಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷ ಸೂರ್ಯಕಾಂತ ಕುಲಕರ್ಣಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ವಿವಿಧ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು, ಸಮಿತಿ ಸದಸ್ಯರು ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಗಮನ ಸೆಳೆದರು.
ಗೃಹಲಕ್ಷ್ಮೀ ಯೋಜನೆ ಕುರಿತು ಸಿಡಿಪಿಒ ವಿಕ್ರಮ ಕೆ.ಬಿ. ಹಾಗೂ ಮೇಲ್ವಿಚಾರಕಿ ಮಂಜುಳಾ ಟೋಣೆ ಮಾಹಿತಿ ನೀಡಿದರು. ಖಾನಾಪುರ ತಾಲ್ಲೂಕಿನಲ್ಲಿ ಗೃಹಲಕ್ಷ್ಮೀ ಯೋಜನೆಯ 608 ಫಲಾನುಭವಿ ಮಹಿಳೆಯರು ಮೃತಪಟ್ಟಿದ್ದಾರೆ. ಇವರಲ್ಲಿ 159 ಮಹಿಳೆಯರ ಸೊಸೆಯರು ತಮ್ಮ ಹೆಸರಿನಲ್ಲಿ ಹೊಸದಾಗಿ ಅರ್ಜಿ ಸಲ್ಲಿಸಿ ಯೋಜನೆಯ ಸೌಲಭ್ಯ ಪಡೆಯುತ್ತಿದ್ದಾರೆ. ಉಳಿದ 449 ಮೃತ ಫಲಾನುಭವಿಗಳ ಖಾತೆಗಳಲ್ಲಿ ಬ್ಯಾಂಕ್ನಲ್ಲಿ ಸುಮಾರು 12 ಲಕ್ಷ ರೂ. ಹಾಗೂ ಅಂಚೆ ಖಾತೆಗಳಲ್ಲಿ 4.20 ಲಕ್ಷ ರೂ. ಜಮೆಯಾಗಿವೆ. ಇದರಲ್ಲಿ 2,48,800 ರೂ. ಸರ್ಕಾರಕ್ಕೆ ಹಿಂದಿರುಗಿಸಲಾಗಿದೆ. ಉಳಿದ ಹಣವನ್ನು ಸರ್ಕಾರಕ್ಕೆ ಮರಳಿಸುವಂತೆ ಸಂಬಂಧಿತ ಬ್ಯಾಂಕ್ಗಳಿಗೆ ಪತ್ರ ಕಳುಹಿಸಲಾಗಿದೆ. ತಾಲ್ಲೂಕಿನಲ್ಲಿ ಪ್ರಸ್ತುತ 63,682 ಗೃಹಲಕ್ಷ್ಮೀ ಫಲಾನುಭವಿಗಳಿದ್ದು, ಪ್ರತಿ ತಿಂಗಳು ಸುಮಾರು 7.27 ಕೋಟಿ ರೂ. ಹಣ ಬಿಡುಗಡೆಯಾಗುತ್ತಿದೆ.
ಶಕ್ತಿ ಯೋಜನೆ ಕುರಿತು ಖಾನಾಪುರ ಡಿಪೋ ನಿಯಂತ್ರಕ ದುರ್ಗಾವಿ ಮಾಹಿತಿ ನೀಡಿದ್ದು, ಜುಲೈ ತಿಂಗಳಲ್ಲಿ ಮಹಿಳೆಯರು 6,40,576 ಉಚಿತ ಪ್ರಯಾಣ ಮಾಡಿದ್ದು, ಟಿಕೆಟ್ ಮೊತ್ತ 1.70 ಕೋಟಿ ರೂ. ಆಗಿದೆ ಎಂದು ತಿಳಿಸಿದರು. ಸದಸ್ಯೆ ಪ್ರಿಯಾಂಕಾ ಗಾವಕರ ಅವರು ಚೋರ್ಲಾ ಬಸ್ ಸೇವೆ ಯಾವಾಗ ಆರಂಭವಾಗಲಿದೆ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ದುರ್ಗಾವಿ, ಎರಡು-ಮೂರು ದಿನಗಳಲ್ಲಿ ಚೋರ್ಲಾ ಬಸ್ ಸೇವೆ ಆರಂಭಿಸಲಾಗುವುದು ಎಂದರು. ಬಸ್ ಆರಂಭವಾಗದಿದ್ದರೆ ರಾಜ್ಯ ಗ್ಯಾರಂಟಿ ಯೋಜನೆ ಅಧ್ಯಕ್ಷ ರೇವಣ್ಣ ಅವರ ಗಮನಕ್ಕೆ ತರಲಾಗುವುದು ಎಂದು ಅಧ್ಯಕ್ಷ ಸೂರ್ಯಕಾಂತ ಕುಲಕರ್ಣಿ ಎಚ್ಚರಿಸಿದರು.
ಗೃಹಜ್ಯೋತಿ ಯೋಜನೆ ಕುರಿತು ಅಧಿಕಾರಿ ಪ್ರವೀಣ ಬರಗಾಳೆ ಮಾತನಾಡಿ, ಆಗಸ್ಟ್ ತಿಂಗಳಲ್ಲಿ 2.20 ಕೋಟಿ ರೂ. ವಿದ್ಯುತ್ ಬಿಲ್ ಮನ್ನಾ ಆಗಿದೆ ಎಂದು ತಿಳಿಸಿದರು. ತಾಲ್ಲೂಕಿನಲ್ಲಿ ಇನ್ನೂ 6,612 ಪುನರ್ವ್ಯವಸ್ಥೆ ಕಾರ್ಯಗಳು ಬಾಕಿ ಇವೆ ಎಂದರು.
ಸಭೆಯಲ್ಲಿ ರುದ್ರಪ್ಪ ಪಾಟೀಲ, ವಿವೇಕ ತಡಕೋಡ, ದೀಪಾ ಪಾಟೀಲ, ಪ್ರಕಾಶ ಮಾದಾರ, ಶಾಂತಾರಾಮ ಗುರುವ್, ಇಸಾಖಾನ್ ಪಠಾಣ್, ಜಗದೀಶ ಪಾಟೀಲ, ಯೂಸುಫ್ ಹಾರಗಿ, ಸಂಜಯ ಗಾವಡೆ, ರಾಜಾ ಕುಡಾಳೆ, ಗೋವಿಂದ ಪಾಟೀಲ ಹಾಗೂ ರಮೇಶ್ ಮೈತ್ರಿ ಉಪಸ್ಥಿತರಿದ್ದರು.