खानापूर : जिल्हा परिषद मुख्य कार्यकारी अधिकारी राहुल शिंदे यांनी आज खानापूर तालुक्यातील हलकर्णी ग्रामपंचायत हद्दीतील हत्तरगुंजी गावातील इंदिरा नगर परिसरात वास्तव्यास असलेल्या हक्कीपिक्की आदिवासी व कातकरी समाजाच्या वस्तीला भेट देऊन त्यांच्या विविध समस्यांची पाहणी केली.
खानापूर तालुक्यातील हक्कीपिक्की आदिवासी आणि कातकरी समाजाच्या विविध मागण्यांसाठी कर्नाटक राज्य दलित संघर्ष समिती समन्वय संघटनेने सातत्याने पाठपुरावा केल्याच्या पार्श्वभूमीवर जिल्हा परिषद मुख्य कार्यकारी अधिकारी राहुल शिंदे यांनी तालुक्यातील विविध विभागांच्या अधिकाऱ्यांसह संबंधित ठिकाणी भेट दिली.
यावेळी त्यांनी दोन्ही समाजांतील मुलांचे शिक्षण, आरोग्य सेवा, पिण्याच्या पाण्याची समस्या, आधार कार्ड व इतर ओळखपत्रे, तसेच निवासी जागा आणि इतर मूलभूत सुविधांची प्रत्यक्ष पाहणी केली. संबंधित अधिकाऱ्यांशी चर्चा करून आवश्यक त्या सुविधा तातडीने उपलब्ध करून देण्याच्या सूचना त्यांनी दिल्या.
या प्रसंगी खानापूर तालुका कार्यकारी अधिकारी रमेश मेट्री, समाज कल्याण विभागाचे तालुका सहायक संचालक बसवराज चेन्नईवार, क्षेत्रशिक्षणाधिकारी, महिला व बालकल्याण विभागाचे तालुका अधिकारी, हलकर्णी ग्रामपंचायतीच्या विकास अधिकारी रेश्मा पानेवली तसेच तालुक्यातील विविध विभागांचे अधिकारी उपस्थित होते.
तसेच, कर्नाटक राज्य दलित संघर्ष समितीचे जिल्हा सरचिटणीस राजशेखर हिंदलगी, तालुकाध्यक्ष राघवेंद्र चलवाडी, सावित्री मदार, ग्रामपंचायत सदस्य संदीप मावळी, रविंद्र मदार, रवींद्र कांबळे, दयानंद हक्कीपिक्की, कुमार हक्कीपिक्की, कार्तिक तलवार, दत्तू कातकरी यांच्यासह स्थानिक नागरिक मोठ्या संख्येने उपस्थित होते.
ಹತ್ತರಗುಂಜಿ ಹಕ್ಕಿಪಿಕ್ಕಿ ಹಾಗೂ ಕಾತ್ಕರಿ ಸಮುದಾಯಕ್ಕೆ ಜಿಲ್ಲಾ ಪಂಚಾಯತ್ ಸಿಇಒ ರಾಹುಲ್ ಶಿಂಧೆ ಭೇಟಿ
ಖಾನಾಪುರ : ಇಂದು ಖಾನಾಪುರ ತಾಲೂಕಿನ ಹಲಕರ್ಣಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹತ್ತರಗುಂಜಿ ಗ್ರಾಮದ ಇಂದಿರಾ ನಗರದ ಸಮೀಪ ವಾಸಿಸುತ್ತಿರುವ ಹಕ್ಕಿಪಿಕ್ಕಿ ಆದಿವಾಸಿ ಹಾಗೂ ಕಾತ್ಕರಿ ಸಮುದಾಯದ ಜನರನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ಶಿಂಧೆ ಭೇಟಿ ಮಾಡಿ, ಅವರ ಸಮಸ್ಯೆಗಳ ಕುರಿತು ಸ್ಥಳ ಪರಿಶೀಲನೆ ನಡೆಸಿದರು.
ಖಾನಾಪುರ ತಾಲೂಕಿನ ಹಕ್ಕಿಪಿಕ್ಕಿ ಆದಿವಾಸಿ ಹಾಗೂ ಕಾತ್ಕರಿ ಸಮುದಾಯಗಳ ವಿವಿಧ ಬೇಡಿಕೆಗಳ ಕುರಿತು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಸಂಯೋಜಕ ಸಂಘಟನೆ ಸರ್ಕಾರ, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಲ್ಲಿಸಿದ್ದ ಮನವಿಯ ಫಲವಾಗಿ, ಇಂದು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಿಇಒ ರಾಹುಲ್ ಶಿಂಧೆ ಸ್ಥಳಕ್ಕೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಸಮುದಾಯದ ಮಕ್ಕಳ ಶಿಕ್ಷಣ, ಆರೋಗ್ಯ, ಕುಡಿಯುವ ನೀರಿನ ಸಮಸ್ಯೆ, ಆಧಾರ್ ಕಾರ್ಡ್ ಹಾಗೂ ಗುರುತಿನ ಚೀಟಿಗಳ ವಿತರಣೆ, ವಸತಿ ನಿವೇಶನ ಮತ್ತು ಇತರೆ ಮೂಲಭೂತ ಸೌಲಭ್ಯಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಥಳದಲ್ಲೇ ಸೂಚನೆ ನೀಡಿದರು.
ಭೇಟಿಯ ವೇಳೆ ಖಾನಾಪುರ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳಾದ ರಮೇಶ್ ಮೇತ್ರಿ, ತಾಲೂಕ ಪಂಚಾಯಿತಿಯ ಅಸಿಸ್ಟೆಂಟ್ ನಿರ್ದೇಶಕ್ ವಿಜಯ್ ಕೋತೀನ, ಸಮಾಜ ಕಲ್ಯಾಣ ಇಲಾಖೆಯ ತಾಲೂಕು ಸಹಾಯಕ ನಿರ್ದೇಶಕರಾದ ಬಸವರಾಜ್ ಚೆನ್ನೈನವರ್, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಹಲಕರ್ಣಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ರೇಷ್ಮಾ ಪಾನೇವಾಲಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಅದೇ ರೀತಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜಶೇಖರ್ ಹಿಂಡಲಗಿ, ತಾಲೂಕು ಅಧ್ಯಕ್ಷ ರಾಘವೇಂದ್ರ ಚಲವಾದಿ, ಸಾವಿತ್ರಿ ಮಾದಾರ್, ಗ್ರಾಮ ಪಂಚಾಯತ್ ಸದಸ್ಯ ರವಿ ಮಾದಾರ್, ಸಂದೀಪ್ ಚಲವಾದಿ, ಮಾರುತಿ ಕಾಂಬಳೆ, ಬಸವರಾಜ್ ಮಾದಾರ್, ದಯಾನಂದ ಹಕ್ಕಿಪಿಕ್ಕಿ, ಕುಮಾರ್ ಹಕ್ಕಿಪಿಕ್ಕಿ, ಕಾರ್ತಿಕ್ ತಳವಾರ್ ಹಾಗೂ ದತ್ತು ಕಾತ್ಕರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.